ಕನ್ನಡ ನಟಿಯರ ಕನ್ನಡದ ಬಗ್ಗೆ ಒಂದು ಖಡಕ್ ಲೇಖನ…!

    ಕನ್ನಡ ಬಂದರೂ ನೆಟ್ಟಗೆ ಕನ್ನಡ ಮಾತಾಡದ ನಟ-ನಟಿಯರನ್ನು ಗುಂಡಿಟ್ಟು ಹೊಡೆಯಿರಿ…!     ದಿನಕ್ಕೊಂಮ್ಮೆ ಕ್ರಾಂತಿ ಬಗ್ಗೆ ಭಾಷಣ ಮಾಡ್ತಾ,
ಕ್ರಾಂತಿಯ ಭ್ರಾಂತಿಯಲ್ಲೇ ಮುಳುಗಿರುವ ರಾಜಕಾರಣಿಗಳೇ, ಕನ್ನಡ ಹೋರಾಟಗಾರರೆಂದು ಬಿಂಬಿಸಿಕೊಳ್ಳುವ ಕೆಲವು ‘ಓರಾಟಗಾರರೇ’, ದಿನಾಲೂ ಟಿ.ವಿಯಲ್ಲಿ, ಪೇಪರಲ್ಲಿ ಕನ್ನಡದ ಬಗ್ಗೆ ವಿಧ ವಿಧವಾಗಿ ಥರಾವರಿ ಹೇಳಿಕೆಗಳನ್ನ ಕೊಡುವ ಮಂದಿ ಇಂಥ ಒಂದು ಹೇಳಿಕೆನಾದ್ರೂ ಕೊಟ್ರೆ ಉಪಯೋಗವಾದರೂ ಆದೀತು…!
    ಕನ್ನಡ ಬಂದರೂ ಕನ್ನಡ ಉಲಿಯದ, ಕಾವೇರಿ ಗಲಾಟೆ ಆದ
ತಕ್ಷಣ ಕಾವೇರಿ ನಮ್ಮದು ಅಂತಾ ಬೊಗಳೆ ಬಿಟ್ಟು “ಕನ್ನಡ ನಿಷ್ಠೆ ತೋರುವ ನಟನಾ ಮಣಿಗಳಿರಾ…, ಕನ್ನಡ ಎಂಬೋ ಒಂದು ಸುಂದರ ಭಾಷೆ ಇದೆ. ಅದನ್ನ ಇಂಗ್ಳೀಷ್ ಜೊತೆ “ಕಲಬೆರಿಕೆ ಮಾಡಿ ಕಲಸಂಬಲಸ ಮಾಡಿ ನಿಮ್ಮ ಮಾನ ಮರ್ಯಾದೆ ಜಗಜ್ಜಾಹೀರಾಗಿಸಿಕೊಳ್ಳಬೇಡಿ! ನಿಮ್ಮ ಹಾಗೆ ಕನ್ನಡ ಬೇವರ್ಸಿಯಲ್ಲ. ಅದಕ್ಕೊಂದು ಹಿನ್ನೆಲೆ ಇದೆ, ಭದ್ರ ತಳಪಾಯವಿದೆ.
       ಕನ್ನಡದ ಸ್ಟಾರು ಪಟ್ಟಕ್ಕೆ ಏರಿದ ಹಲವು ಮಂದಿಯ ಕನ್ನಡ ಮಾತುಗಳನ್ನ ಕೇಳುತ್ತಿದ್ದರೆ, ಕೈಗೆ ಸಿಕ್ಕಿದ್ದರಲ್ಲಿ ಹೊಡೆಯೋಣವೆನ್ನುವಷ್ಟು ಸಿಟ್ಟು ನೆತ್ತಿಗೇರುತ್ತದೆ. ಇವರಿಗೆ ಭಾವನಾತ್ಮಕವಾಗಿ ಜನರ ಭಾವನೆಗಳನ್ನು ಕೆರಳಿಸಿ ಡೈಲಾಗು
ಹೊಡಿಯಕ್ಕೆ ಬರುತ್ತೆ, ಕೋಟಿಗಟ್ಲೆ ಗಂಟು ಹೊಡಿಯಕ್ಕೆ ಬರುತ್ತೆ, ಆದ್ರೆ ಇದೆಲ್ಲಾ
ಬಂದ್ರೆ ಏನ್ ಉಪಯೋಗ..? ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ? ಇವರ ಸಂದರ್ಶನಗಳನ್ನ ಒಮ್ಮೆ ಗಮನವಿಟ್ಟು ನೋಡಿ. ಅದರಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚಾಗಿ ಇಂಗ್ಳೀಷ್ ಶಬ್ಧಗಳು ರಾರಾಜಿಸುತ್ತವೆ(ಭಲೇ ಕಿರಿ ಕಿರಿ ಮಾಡುತ್ತವೆ). ಎಲ್ಲವನ್ನೂ ಕನ್ನಡದಲ್ಲಿ ಹೇಳಲಿಕ್ಕೆ ಹೊರಟರೆ ಕನ್ನಡವನ್ನೇ ಅಪಹಾಸ್ಯ ಮಾಡಿದಂತಾಗುತ್ತದೆ. ಮಧ್ಯ ಮಧ್ಯ ಇಂಗ್ಳೀಶ್ ಅನಿವಾರ್ಯವಾಗಿ ಬಂದರೆ ಅದನ್ನು ಒಪ್ಪಿಕೊಳ್ಳಬಹುದು. ಇಲ್ಲದಿದ್ದರೆ ಅದು ಕನ್ನಡ  ಕಟ್ಟರ್‌ವಾದಿತನ ಆದೀತು. ಆದರೆ
ಇಂಗ್ಳೀಶ್‌ನ ಮಧ್ಯ ಮಧ್ಯ ಕನ್ನಡ ತೂರಿ ಬಂದರೆ, ಅದಕ್ಕಿಂತ ಕಿರಿಕಿರಿ ಮತ್ತೊಂದಿಲ್ಲ. ಅದನ್ನ ಸಹಿಸಿಕೊಳ್ಳುವುದಾದರೂ ಹೇಗೆ? ಸ್ಯಾಂಪಲ್‌ಗೆ ಅಂತಾ ರಮ್ಯ, ರಕ್ಷಿತ, ಡೈಸಿ ಬೋಪಣ್ಣ ಮುಂತಾದವರ ಟಿ.ವಿ ಸಂದರ್ಶನಗಳನ್ನ ನೋಡಿ. ಇವರ ಕನ್ನಡಾಭಿಮಾನ ತೋರ್ಪಡುತ್ತದೆ. so ಹಾಗಾಗಿ, its really funtastic, you know..? i like it very much.  ಅನ್ನೋ ಅಣಿಮುತ್ತುಗಳನ್ನು ಉದುರಿಸುತ್ತಾರೆ. (ತಲೆಯಲ್ಲಿರೋ ಕೂದಲು ಉದುರುವವರೆಗೂ ಹೀಗೆ ಮುತ್ತುಗಳನ್ನು ಉದುರಿಸುತ್ತಲೇ ಹೋಗುತ್ತಾರೆ!) ಗಮನಿಸಿ, ಇವರೆಲ್ಲಾ ಕನ್ನಡದ ಮಹಾನ್ ಮಹಾನ್ ತಾರೆಯರು! ಅದ್ಯಾವ ಸೀಮೆ ತಾರೆಯರೋ? ಇವರನ್ನ
ತಾರೆಯರನ್ನಾಗಿಸಿದ ನಮಗೆ ನಾವು… ವರಿಗೆ ಬೆಳೆಯೋದಕ್ಕೆ ಕನ್ನಡ ಇಂಡಸ್ಟ್ರಿ ಬೇಕು, ಇವರ ಸಿನಿಮಾ ನೋಡಕ್ಕೆ ಬಡಪಾಯಿ ಕನ್ನಡಿಗರು ಬೇಕು, ಸಿನಿಮಾದಿಂದ ಬರುವ ದುಡ್ಡನ್ನ ಬಾಚಿಕೊಳ್ಳಲೂಬೇಕು. ಇನ್ನು ರಮ್ಯ, ರಕ್ಷಿತರ ಕನ್ನಡ ಕೇಳೋ ಬದಲು ನೇಣು ಹಾಕಿಕೊಳ್ಳೋದು ವಾಸಿ! ಅದಾದರೂ ಒಂದೇಟಿಗೆ ಮುಕ್ತಿ ಕೊಡಬಹುದೇನೋ! ಇವ್ರಿಗೆಲ್ಲಾ ಏನಾಗಿದೆ? ಇವ್ರನ್ನ ನೋಡಿಕೊಂಡ ಕನ್ನಡ ಸಂಘ ಸಂಸ್ಥೆಗಳು ಏನು ಮಾಡುತ್ತಿವೆ? ನಾವು ಏನು ಮಾಡುತ್ತಿದ್ದೇವೆ…? ಎಂದಾದರೂ ಕನ್ನಡ ನಾಡಲ್ಲೇ ಹುಟ್ಟಿ ಬೆಳೆದು, ಕನ್ನಡದ ಬಗ್ಗೆ ತಾತ್ಸಾರ ಬರುವಂತೆ ನೆಡೆದುಕೊಳ್ಳುತ್ತಿರುವ  
ಈ ನಟನಾ ಮಣಿಗಳ ಬಗ್ಗೆ ದನಿ ಎತ್ತಿದ್ದೇವೆಯಾ? ಧರಣಿ ಕೂತಿದ್ದೇವೆಯಾ? ಸರಿಯಾಗಿ ಕನ್ನಡ ಮಾತಾಡು ಅಂತ ಧಮಕಿ ಹಾಕಿದ್ದೀವಾ? ಯಾವುದೂ ಇಲ್ಲ. ಮತ್ತಿನ್ಯಾಕೆ ಇವರನ್ನ ತಲೆಮೇಲೆ ಹೊತ್ತುಕೊಂಡು ಕುಣಿಬೇಕು? ಇವ್ಯಾವನ್ನೂ ಮಾಡದೇ ಕನ್ನಡ ಕನ್ನಡ ಅಂತಾ ಬೊಂಬಾಯಿ ಮಾಡಿದ್ರೆ ಏನು ಪ್ರಯೋಜನ?
      ಈಗಲಾದ್ರೂ ನಾವು ಎಚ್ಚೆತ್ತುಕೊಳ್ಳಬೇಕು.  ಕನ್ನಡದಲ್ಲಿ ಮಾತಾಡು ಇಲ್ಲಾಂದ್ರೆ ಕನ್ನಡ ಇಂಡಸ್ಟ್ರಿಯಿಂದ ತೊಲಗಾಚೆ ಎಂದು ದನಿಯೆತ್ತರಿಸಿ ಹೇಳಬೇಕು. ಕರ್ನಾಟಕದಲ್ಲಿ  ಹುಟ್ಟಿ ಬೆಳೆದು ಕನ್ನಡ ಮಾತಾಡಕ್ಕೆ ಆಗಲ್ವಾ? ಅಂತಾ ನಿಲ್ಸಿ ಗಟ್ಟಿಯಾಗಿ ಕೇಳಬೇಕು.
     ಇದನ್ನೆಲ್ಲಾ ನೆನೆಸಿಕೊಂಡಾಗ ಅಣ್ಣಾವ್ರ ನೆನೆಪಾಗುತ್ತೆ.
ಅಣ್ಣಾವ್ರ ಕನ್ನಡ ಕೇಳ್ತಾ ಇದ್ರೆ ಅದು ಒಂದು ಆತ್ಮೀಯ ಸಂಭಾಷಣೆ ಅನ್ನಿಸ್ತಾ
ಇರ್ತಿತ್ತು. ಅಭಿಮಾನಿ ದೇವರುಗಳೇ ಅನ್ನೋ ವಾಕ್ಯವೇ ಮೈಪುಕಳಗೊಳಿಸುತ್ತಿತ್ತು,
 ರೋಮಾಂಚನಗೊಳ್ಳುವಂತೆ ಮಾಡುತ್ತಿತ್ತು. ಡಾ||ರಾಜ್‌ರವರಷ್ಟು ಸ್ಪಷ್ಟವಾಗಿ
ಕನ್ನಡ ಉಚ್ಛರಿಸಿದ ಮಾತಾಡಿದ ವ್ಯಕ್ತಿನ ತೋರ್ಸಿ ನೋಡೋಣ? ಸಾಧ್ಯನೇ ಇಲ್ಲ. 
ಅದಕ್ಕೇ ಅಭಿಮಾನಿ ದೇವರುಗಳ ಹೃದಯದಲ್ಲಿ ಶಾಶ್ವತವಾಗಿ ಸಾರ್ಥಕ್ಯದ  ನೆಲೆ
ಕಂಡುಕೊಂಡ ಆತ್ಮ ಅದು. ಅದಕ್ಕೇ ಕನ್ನಡಿಗರ ಮನೆ ಮನಗಳನ್ನು ತುಂಬಿಕೊಂಡಿದ್ದು.

2 comments so far

  1. shashank on

    ley chennagaithi….theme change madu….

  2. Sanjay Kattimani on

    ನಿಜ. ಇವರ ಕನ್ನಡ ಕಂಡು ನಾನು ಹಲವಾರು ಬಾರಿ ಇದನ್ನೇ ಯೊಚಿಸಿದ್ದೆನೆ. ಈ ಬೆಕ್ಕುಗಳಿಗೆ ಗಂಟೆ ಕಟ್ಟುವರ್‍ಯಾರು?


Leave a reply